ಮುದ್ದೇಬಿಹಾಳಕ್ಕೆ ಹೋದಾಗಿನ ಘಟನೆ
ಒಮ್ಮೆ ಮುದ್ದೇಬಿಹಾಳಕ್ಕೆ ನಾನು ನನ್ನ ಜೊತೆ ಹಿಂದ ಪದ ಹಾಡುವ ಕಲಾತಂಡದ ಗೆಳೆಯ ಇಬ್ಬರೂ ಕೂಡಿ ಮುದ್ದೇಬಿಹಾಳದ ಹಳೆಯ ತಹಶೀಲ್ದಾರ್ ಕಚೇರಿಯ ಹತ್ತಿರ ಮನೀ ಸಂತಿಗಂತ ಹೊಂಟಿದ್ದಿವಿ. ಅಲ್ಲಿ ಆ ಮೈದಾನದಲ್ಲಿ ಕಟಗರ ದಾವಲಸಾಬ್ (ಜೋಗಪ್ಪ ) ಮೂರ್ನಾಲ್ಕು ಗಂಡು ಜೋಗಪ್ಪಗಳು ಕೂಡಿ ನಿಂತಿದ್ರು ಆಲಮಟ್ಟಿ ಹತ್ತಿರ ಬೇನಾಳದಾಕಿ ಒಬ್ಬಾಕಿ ಗೀಗಿ ಪದ ಚೌಡಕಿ ಪದ ಹಾಡಾಕಿ. ಎಲ್ಲರೂ ಕೂಡಿಕೊಂಡು ಅಲ್ಲಿ ಪದಾ ಹಾಡಾಕ್ಕ ಹತ್ತಿದ್ರು.ಅದನ್ನು ಕೇಳಾಕ್ಕ ಮಂದಿ ಮುಕ್ರಿ ಬಿದ್ದಿದ್ರು. ನಾವು ಕಲಾವಿದರಲ್ಲ ನಮಗೂ ಕೇಳಬೇಕಂತ […]










