

ಕಾದಿರುವಳು ಶಬರಿ ಶ್ರೀರಾಮ ಬರುವನೆಂದು,
ಕೊನೆಗೂ ಶ್ರೀರಾಮ ಬಂದೇಬಿಟ್ಟ, ಶಬರಿಯ ಭಕ್ತಿಗೆ ಮೆಚ್ಚಿ ಆ ಮಹಾಮಾತೆಗೆ ಆಶೀರ್ವದಿಸಿ, ಅನುಗ್ರಹಿಸಿ ಶಬರಿಯ ಜೀವನವನ್ನು ಪಾವನ ಮಾಡಿದ,
ಈ ಮಾತು ಯಾಕೆ ನೆನಪಾಯಿತು ಎಂದರೆ ಬಹುಶಹ ಕನ್ನಡ ಚಿತ್ರರಂಗದ ಅಸಂಖ್ಯಾತ ಸಹೃದಯಿ ಕಲಾವಿದರ ನಿರ್ಮಾಪಕರ ನಿರ್ದೇಶಕರ ಎಲ್ಲ ತಂತ್ರಜ್ಞಾನ ಹಾಗೂ ಸಿನಿಮಾ ಗಾಗಿ ದುಡಿಯುವ ಎಲ್ಲ ಹೃದಯವಂತರ ಆಶಯವು ಇದೇ ಆಗಿದೆ,
1934ರಲ್ಲಿ ಬಂದಂತಹ
ಸತಿ ಸುಲೋಚನಾ ಎಂಬ ಕನ್ನಡದ ಮೊಟ್ಟ ಮೊದಲ ವಾಕ್ ಚಿತ್ರದಿಂದ ಶುರುವಾದ ಕನ್ನಡ ಸಿನಿ ಪಯಣ ಇವತ್ತಿನ ತನಕದ ಹಾಗೂ ಭವಿಷ್ಯದ ಮುಂದಿನ ಜನಾಂಗಕ್ಕೂ ಸಿನಿಮಾ ವನ್ನು ನೆನಪಿಸುವಂತೆ ಮಾಡಿದೆ, ಇಂಥದ್ದೊಂದು ಅಪರೂಪದ ಕನ್ನಡದ ಕೀರ್ತಿ ಪತಾಕೆಯನ್ನು ದೊಡ್ಡ ಮಟ್ಟಕ್ಕೆ ಹಾರಿಸಿದ ಕೀರ್ತಿ ಸತಿ ಸುಲೋಚನ ಚಿತ್ರತಂಡಕ್ಕೆ ಸಂಪೂರ್ಣವಾಗಿ ಸಲ್ಲುತ್ತದೆ.
ಸತಿ ಸುಲೋಚನಾ ಚಿತ್ರ ಬಂದು 92 ವರ್ಷಗಳಾದವು, ಇನ್ನು ಎಂಟು ವರ್ಷ ಕಳೆದರೆ ನಮ್ಮ ಚಂದದ ಚಂದನವನಕ್ಕೆ ಭರ್ಜರಿ ನೂರು ವರ್ಷದ ಸಂಭ್ರಮ.
ಇಂತಹ ದಂತಕತೆಯ ಭಾಗವಾಗಿರುವ,
ನಿರ್ದೇಶಕ ವೈವಿ ರಾವ್,
ನಿರ್ಮಾಪಕರಾದ ಎಸ್ ಚಮನ್ ಲಾಲ್ ದುಂಗಾಜಿ,ಚಿತ್ರಕಥೆಗಾರ
ಬೆಳ್ಳಾವಿ ನರಹರಿ ಶಾಸ್ತ್ರಿ,
ಕಲಾವಿದರಾದ,
ಸುಬ್ಬಯ್ಯ ನಾಯ್ಡು
ತ್ರಿಪುರಾಂಬ
ನಾಗೇಂದ್ರ ರಾವ್, ಲಕ್ಷ್ಮಿ ದೇವಿ, ಸಿ.ಟಿ.ಶೇಷಾಚಲಮ್, ಇಂದುಬಾಲಾ ಎಲ್ಲರನ್ನೂ ಕೃತಜ್ಞತಾ ಭಾವದಿಂದ ನಡೆಯುತ್ತಾ ಹಾಗೆ ಅಂದಿನಿಂದ ಇಂದಿನ ತನಕವೂ ಕನ್ನಡ ಪ್ರೇಕ್ಷಕ ಪ್ರಭುಗಳಿಗೆ ಮನರಂಜನೆಯನ್ನು ನೀಡಿ ಚಿತ್ರೋದ್ಯಮವನ್ನು ಮುನ್ನಡೆಸುತ್ತಿರುವ ಎಲ್ಲ ಕಲಾವಿದರು ತಂತ್ರಜ್ಞರು ನಿರ್ಮಾಪಕರು ಹಾಗೂ ವಿಶೇಷವಾಗಿ ಅಭಿಮಾನಿ ದೇವರುಗಳಿಗೆ,
ಚಂದನ ಮನದ ಚಂದದ ನೂರರ ಸಂಭ್ರಮ ಅವಿಸ್ಮರಣೀಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ..
ರವೀ ಸಾಸನೂರ್
