ಆ ಶರಣರು ಹಾಡಿದ ಪದ ಯಾವುದು ಎಂದು ಕೇಳಿದಾಗ ದಾಸ ಪುರಂದರ ದಾಸರು ಹಾಡಿದ ಪದವಧು-
ಇದು ಭಾಗ್ಯ, ಇದು ಭಾಗ್ಯ’ ಇದು ಭಾಗ್ಯವಯ್ಯ,
ಇದು ಭಾಗ್ಯವಯ್ಯ ll
ಪದುಮನಾಭನ ಪಾದ ಭಜಿಸೆ ಸುಖವಯ್ಯ
ಉದುಮನಾಭನ ಪಾದ ಭಜಿಸೆ ಸುಖವಯ್ಯ
ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ
ಇದು ಭಾಗ್ಯವಯ್ಯ ll
ಕಲ್ಲಾಗಿ ಇರಬೇಕು ಮಣ್ಣಿನ ಭವ ತೊರೆಯೊಳಗೆ
ಬಿಲ್ಲಾಗಿ ಇರಬೇಕು ಬಲ್ಲವರೊಳು
ಮೆಲ್ಲಗೆ ಮಾಧವನ ಮನವ ಮೆಚ್ಚಿಸಬೇಕು
ಮೆಲ್ಲಗೆ ಮಾಧವನ ಮನವ ಮೆಚ್ಚಿಸಬೇಕು ಬೆಲ್ಲವಾಗಿರಬೇಕು ಬಂಧು ಜನರೊಳಗೆ
ಬೆಲ್ಲವಾಗಿರಬೇಕು ಬಂದು ಜನರೊಳಗೆ
ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ
ಇದು ಭಾಗ್ಯವಯ್ಯ ll
ಬುದ್ಧಿಯಲ್ಲಿ ತನು ಮನವ ತಿದ್ದಿಕೊಳ್ಳಲು ಬೇಕು
ಮುದ್ದಾಗಿ ಇರಬೇಕು ಮುನಿ ಯೋಗಿಗಳಿಗೆ
ಮದ್ವಮತಾಪಿಯೋಳು ನೀನಾಗಿರಲು ಬೇಕು
ಮದ್ವಮತಾಪಿಯೋಳು ನೀನಾಗಿರಲು ಬೇಕು
ಶುದ್ಧನಾಗಿರಬೇಕು ಕರುಣತ್ರಯಗಳಲ್ಲಿ
ಶುದ್ಧನಾಗಿರಬೇಕು ಕರುಣತ್ರಯಗಳಲ್ಲಿ
ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ
ಇದು ಭಾಗ್ಯವಯ್ಯ ll
ವಿಷಯಭೋಗದ ತೃಣಕೆ ಉರಿಯಾಗಿರಲು ಬೇಕು
ನಿಶೆಯಾಗಲು ಶ್ರೀಹರಿಯ ಭಜಿಸಬೇಕು
ವಿಷಯಭೋಗದ ತೃಣಕೆ ಉರಿಯಾಗಿರಲು ಬೇಕು
ನಿಶೆಯಾಗಲು ಶ್ರೀಹರಿಯ ಭಜಿಸಬೇಕು
ವಸುದೇಶ ಪುರಂದರ ವಿಠ್ಠಲ ನಾಮವಾ
ವಸುದೇಶ ಪುರಂದರ ವಿಠ್ಠಲ ನಾಮವಾ ll
ಹಸನಾಗಿ ನೆನೆ ನೆನೆದು ಸುಖಿಯಾಗಬೇಕು
ಹಸನಾಗಿ ನೆನೆ ನೆನೆದು ಸುಖಿಯಾಗಿರಬೇಕು
ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ
ಇದು ಭಾಗ್ಯವಯ್ಯ ll
ಪದುಮನಾಭನ ಪಾದ ಭಜಿಸೆ ಸುಖವಯ್ಯ
ಪದುಮನಾಭನ ಪಾದ ಭಜಿಸೆ ಸುಖವಯ್ಯ
ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ
ಇದು ಭಾಗ್ಯವಯ್ಯ ಇದು ಭಾಗ್ಯವಯ್ಯ
ಇದು ಭಾಗ್ಯವಯ್ಯ ll
"ಮನುಷ್ಯನಿಗೆ ಯಾವುದು ಭಾಗ್ಯ ಅಂದ್ರೆ ಯಾವುದು ಭಾಗ್ಯ ಅಲ್ಲ . ಪರಮಾತ್ಮನ ನಾಮಸ್ಮರಣೆ ಏನು ಮಾಡ್ತೀವಲ್ಲ ಅದು ಭಾಗ್ಯ. ಪದುಮನಾಭನ ....
ಈಗ ಏನಿದು ಭಜನಾ ಮಾಡ್ತೀವಿ ಇದು ಭಾಗ್ಯ. ಪದುಮ ಅಂದ್ರೆ ಕಮಲ. ನಾಭ ಅಂದ್ರೆ ನಾಭಿ ಅಥವಾ ಹೊಕ್ಕಳು. ಕಮಲವನ್ನು ನಾಭಿಯಲ್ಲಿ ಇರಿಸಿಕೊಂಡವಾ .. ಪುರಂದರದಾಸರು ವಿಠೋಬನ ಭಕ್ತರು ಅದಕ್ಕೆ ಇದು ಭಾಗ್ಯ ಮತ್ತೊಂದು ಪದ ಇಲ್ಲ ಅಂತ ಹೇಳಿ ಹಾಡಿ ಕುಲ ಕುಲ ಅಂತ ಕುಣಿದಾಡತಿರಿ ಕುಲ ಎಲ್ಲಿಂದ ಬಂತು ಕುಲಗೇಡಿ ಅಂತ ಅದನ್ನ ಹಾಡಿದರು ನಮ್ಮ ದಾಸರು. ಯಾಕಂದ್ರೆ ನಮ್ಮ ಭಾರತ ದೇಶದೊಳಗೆ ಈ ಜಾತೀಯತೆ ಬಹಳ ಆದ ಕುಲಗಳು ಕೂಡ ಬಹಳ ಅದಾವು. "
"ಈಗ ನೋಡ್ರಿ ತಿಂಥಣಿ ಹೊಳಿ ದಂಡಿಗೆ ಆದ.. ಮ್ಯಾಲಿ ಹೊಡಿ ಬ್ರಾಹ್ಮಣರುದು, ಕೆಳಗಿನ ಹೊಳೆ ಲಿಂಗಾಯತರದ್ದು , ಅದರ ಕೆಳಗೆ ಒಕ್ಕಲಿಗರದ್ದು , ಅದರ ಕೆಳಗೆ ಹೊಲೆಯರದ್ದು ,ಮಾದರದು . ಅದು ಹೊಲೆಯರ ಹೊಳಿ, ಇದು ಲಿಂಗಾಯತರ ಹೋಳಿ ಅಂದ್ರೆ, ಮೇಲೆ ಹೊಲ್ಯಾರ ಹೊಳಿ ಇಲ್ಲೇನ್ರಿ ? ನೀರು ಬರೇ ಕೆಳಗೆ ಬರುತ್ತವೆನು, ? ಮ್ಯಾಗ ಇರಲೇನು ? ಅಂತ ಪ್ರಶ್ನೆ ಮಾಡಿದರ ಅದಕ್ಕೆ ಶರಣರ ಹತ್ತಿರ ಉತ್ತರವಿಲ್ಲ.
ಮುಂದುವರೆಯುತ್ತದೆ ……

