75ನೇ ಜನ್ಮ ದಿನೋತ್ಸವ ಯಜಮಾನ ಅಮೃತ ಮಹೋತ್ಸವ
ಕಿಚ್ಚ ಸುದೀಪ್ ತಾವೇ ಈ ಕಾರ್ಯಕ್ರಮದಲ್ಲಿ ಅತೀ ಮುಖ್ಯ ಆಕರ್ಷಣೀಯ ಕೇಂದ್ರ ಬಿಂದುವಾಗಿ ಈ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ,ವಿಷ್ಣು ದಾದಾ ಅವ್ರಿಗೆ ವಿಶೇಷ ಗೌರವ ನೀಡಲಿದ್ದಾರೆ,
200 ಸಿನ್ಮಾಗಳಲ್ಲಿ ನಟಿಸಿ,ಭಾಷೆಗಳನ್ನು ಮೀರಿ ಬೆಳೆದ ಕನ್ನಡದ ಮಹಾನ್ ದಂತಕಥೆ ಸಾಹಸಸಿಂಹ ವಿಷ್ಣುವರ್ಧನ,

ಇತಿಹಾಸದ ಪುಟದಲ್ಲಿ ಶಾಶ್ವತವಾಗಿ ಉಳಿಯುವ ಈ ಅಪರೂಪದ ಮಹಾ ಕಾರ್ಯಕ್ಕೆ ಈ ಬರುವ ಸೆಪ್ಟೆಂಬರ್ 27 ನಿಗದಿಯಾಗಿದ್ದು,
ಬೆಳಿಗ್ಗೆಯಿಂದ ಸಂಜೆ ತನಕ ನಿರಂತರ ಕಾರ್ಯಕ್ರಮ ನಡೆಯತ್ತೆ,ಆವತ್ತು ರಾಜ್ಯದ ಪ್ರತಿ ಮೂಲೆ ಮೂಲೆಯಿಂದ ಅಭಿಮಾನಿಗಳು ಬರ್ತಾ ಇದ್ದಾರೆ ಅನ್ನೋದು ವಿರಕಪುತ್ರ ಶ್ರೀನಿವಾಸ ಮಾತು,


ಎಸ್ ವಿ ರಾಜೇಂದ್ರಸಿಂಗ್ ಬಾಬು ಮಾತನಾಡಿ,ನನ್ನ ವಿಷ್ಣು ಬಾಂಧವ್ಯವನ್ನು ಮಾತಲ್ಲಿ ವರ್ಣಿಸಲಾಗದು,ಅಕ್ಷರಗಳಲ್ಲಿ ಹೇಳಲಾಗದು,
ಇತ್ತೀಚಿಗೆ ತನ್ನ ಗೆಳೆಯರೊಬ್ಬರು ಹೇಳಿದ,ಮುತ್ತಿನಹಾರ ಚಿತ್ರವನ್ನು ಯೂಟ್ಯೂಬ್ ನಲ್ಲಿ 14ಕೋಟಿ ಜನ ನೋಡಿದ್ದರ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು,
ಅಷ್ಟೇ ಅಲ್ಲದೆ ವಿಷ್ಣುವರ್ಧನ ಗೆ ಸಾಮಾಜಿಕ ಕಳಕಳಿ ಬಹಳ ಇತ್ತು,ಆತನ ಹೆಸರಲ್ಲಿ ಆರೋಗ್ಯ ಶಿಕ್ಷಣಕ್ಕೆ ಸಂಬಂಧಪಟ್ಟಂತಹ ಆರ್ಥಿಕ ಸಹಾಯ ಮಾಡುವ ಯೋಚನೆ ಮಾಡಿ,ಎಂಬ ಸಲಹೆಯನ್ನು ವಿರಾಕಪುತ್ರ ಶ್ರೀನಿವಾಸ ರವರಿಗೆ ಸಲಹೆ ಕೊಟ್ಟಿದ್ದು,ವಿಶೇಷವಾಗಿತ್ತು.

ಹೆಂಡತಿಯನ್ನು (ಮಾಯಿ) ತಾಯಿ ಅಂತಾನೆ ಕರೀತಾ ಇದ್ದ ಒಬ್ಬ ಮಹಾನ್ ವ್ಯಕ್ತಿ ಡಾಕ್ಟರ್ ವಿಷ್ಣುವರ್ಧನ,
ಹೆಣ್ಣು ಮಕ್ಕಳ ಬಗ್ಗೆ ವಿಷ್ಣುಗಿದ್ದ ಗೌರವ ಎಲ್ಲರೂ ಕಲಿಯುವಂತದ್ದು ಅಂದಿದ್ದು,ಆತ್ಮೀಯ ಗೆಳೆಯ ಸುಂದರರಾಜ್.ಹೊಸಬರಿಗೆ ಕೊಡುತ್ತಿದ್ದ ಪ್ರೇರಣೆ ಪ್ರೋತ್ಸಾಹ,
ನನಗೆ ಆತ ಹೋಗೋ ಬಾರೋ ಗೆಳೆಯ,ಕನ್ನಡದ ಮರೆಯದ ಮಾಣಿಕ್ಯ ನಮ್ ವಿಷ್ಣು ಅಂತಾ ಹೃದಯತುಂಬಿ ಮಾತಾಡಿದ್ದು,ಹಿರಿಯನಾಟ ಸುಂದರರಾಜ್.
ಕಾರ್ಯಕ್ರಮದ ಕುರಿತಾಗಿ ಮತ್ತಷ್ಟು ಮಾಹಿತಿಯನ್ನು,ಸೆಪ್ಟಂಬರ್ ಮೊದಲ ವಾರದಲ್ಲಿ ತಿಳಿಸಲಾಗುವು,ಎಂದು ಹೇಳಿದ್ದು ವಿರಕಪುತ್ರ ಶ್ರೀನಿವಾಸ ಮಾತಾಗಿತ್ತು.

